ಉಪ್ಪಿನಂಗಡಿ ಮಂಡಲ ವಿದ್ಯಾರ್ಥಿ ವಾಹಿನಿ ಸಮಾವೇಶ
ಉಪ್ಪಿನಂಗಡಿ ಮಂಡಲ ವಿದ್ಯಾರ್ಥಿ ವಾಹಿನಿ ಸಮಾವೇಶ
ದೇಶ: ಜನ ಭವನ,ಮಾಣಿ ಮಠ
ಕಾಲ: ತಾ. 08.01.2017 ಆದಿತ್ಯವಾರ
ಸಮಯ: ಬೆಳಗ್ಗೆ ಗಂಟೆ 10 ರಿಂದ 4 ಗಂಟೆ ವರೆಗೆ
ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಗುರುವಂದನೆಯೊಂದಿಗೆ ಪ್ರಾರಂಭಿಸಲಾಯಿತು.
ಸಮಾವೇಶವನ್ನು ಉಪ್ಪಿನಂಗಡಿ ಮಂಡಲದ ಅಧ್ಯಕ್ಷರಾದ ಶ್ರೀ ಅಶೋಕ ಕೆದ್ಲ, ಕಾರ್ಯದರ್ಶಿಯಾದ ಶ್ರೀ ಶ್ರೀಧರ ಭಟ್ ಕೂವೆತಂಡ, ಹಾರೆಕರೆ ನಾರಯಣ ಭಟ್ ಇವರು ಉದ್ಘಾಟಿಸಿದರು.
ಶ್ರೀ ವಿ.ಜಿ ಭಟ್ ಇವರು ಪ್ರಾಸ್ತಾವಿಕ ನುಡಿಗಳನ್ನು ವಿದ್ಯಾರ್ಥಿಗಳ ಮುಂದಿರಿಸಿದರು.
ಶ್ರೀ ಅಶೋಕ ಕೆದ್ಲ ಇವರು ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಸಂಘಟಿತರಾಗಬೇಕಾದ ಅವಶ್ಯಕತೆಯನ್ನು ತಿಳಿಸಿಕೊಟ್ಟರು.
ಶ್ರೀ ಶ್ರೀಧರ ಭಟ್ ಕೂವೆತಂಡ ಇವರು ಶುಭ ಹಾರೈಸಿದರು.
ಶ್ರೀ ಹಾರೆಕರೆ ನಾರಾಯಣ ಭಟ್ ಇವರು ಮಂಗಲ ಗೋಯಾತ್ರೆಯ ಮಹಾಮಂಗಲ ಸಮಾಪನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತಾಗಿ ಮಾಹಿತಿಗಳನ್ನು ನೀಡಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಶ್ರೀ ಪಶುಪತಿ ಶರ್ಮ ಇವರು ಕಾರ್ಯಗಾರವನ್ನು ನೆರವೇರಿಸಿ ಕೊಟ್ಟರು. ಹಾಗು
ಸಂದರ್ಶನ ಎದುರಿಸುವ ಬಗ್ಗೆ ಶ್ರೀ ಉಂಡೆಮನೆ ವಿಶ್ವೇಶ್ವರ ಭಟ್ ಇವರು ಕಾರ್ಯಗಾರವನ್ನು ನೆರವೇರಿಸಿ ಕೊಟ್ಟರು.
ಮಾಣಿ,ಉರುವಾಲು,ಉಜಿರೆ, ಬೆಟ್ಟಂಪಾಡಿ,ಕಬಕ, ಪುತ್ತೂರು,ಉಪ್ಪಿನಂಗಡಿ, ಮಂಗಳೂರು ಮುಂತಾದ ವಲಯಗಳಿಂದ ಸುಮಾರು 50 ವಿದ್ಯಾರ್ಥಿಗಳು ಕಾರ್ಯಗಾರದ ಪ್ರಯೊಜನವನ್ನು ಪಡೆದರು.
ವಾರ್ಷಿಕ ಕಾರ್ಯಕ್ರಮಗಳಾದ ಕ್ರೀಡೋತ್ಸವ, ಚಾರಣ, ಹಾಗು ಒಂದು ದಿನದ ಪ್ರವಾಸದ ಯೋಜನೆಯ ಬಗ್ಗೆ ಚರ್ಚಿಸಲಾಯಿತು.
ಮಂಗಲ ಗೋಯಾತ್ರೆ ಮಹಾಮಂಗಲ ಸಮಾಪನದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಯಿತು.
ವಿದ್ಯಾರ್ಥಿವಾಹಿನಿ ತಂಡದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಾಹಿನಿಗಳ ಕಾರ್ಯಯೋಜನೆಯ ಕುರಿತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿಷಯಗಳನ್ನು ತಿಳಿಸಲಾಯಿತು
ಶ್ರೀಮತಿ ಉಮಾ ಭಟ್ ಇವರು ಕಾರ್ಯಕ್ರಮ ನಿರೂಪಿಸಿದರು.
ಶ್ರೀ ತಿರುಮಲೇಶ್ವರ ಭಟ್ ಇವರು ವಂದನಾರ್ಪಣೆ ಮಾಡಿದರು.
ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
-ಉಪ್ಪಿನಂಗವಿದ್ಯಾರ್ಥಿ ವಾಹಿನಿ
ಉಪ್ಪಿನಂಗಡಿ ಮಂಡಲ ವಿದ್ಯಾರ್ಥಿ ವಾಹಿನಿ ಸಮಾವೇಶ
Reviewed by Unknown
on
08:11:00
Rating:
No comments: