New Posts

recent

ಕಾಸರಗೋಡು ವಲಯ ವಿದ್ಯಾರ್ಥಿವಾಹಿನಿ ಸಮಾವೇಶ

ಕಾಸರಗೋಡು ವಲಯ ವಿದ್ಯಾರ್ಥಿವಾಹಿನಿ ಸಮಾವೇಶ

ಹವ್ಯಕ ಸಭಾಭವನ ಕಾಸರಗೋಡು ದಿನಾಂಕ 27.12.2016 ಪೂರ್ವಾಹ್ನ 9.00 ಘಂಟೆಗೆ ಶಿಬಿರಾರ್ಥಿಗಳ ನೋಂದಾವಣೆ ನಡೆಯಿತು.ಒಟ್ಟು ಹತ್ತು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿರಿಯ ಗುರಿಕ್ಕಾರರಾದ ಶ್ರೀಯುತ ತೆಕ್ಕೆಕೆರೆ ಶಂಕರನಾರಾಯಣ ಭಟ್ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಗುರುವಂದನೆ,ಆದಿತ್ಯಹೃದಯ ಪಠಣದೊಂದಿಗೆ ಸಮಾವೇಶ ಪ್ರಾರಂಭ.
ಶ್ರೀಮತಿ ಪ್ರೇಮಲತ ಸಿ ಮನ್ನಿಪ್ಪಾಡಿ ಇವರು ವಿದ್ಯಾರ್ಥಿಗಳಿಗೆ ಕಸದಿಂದ ರಸದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಪಾನೀಯ ವಿತರಣೆಯ ನಂತರ ಘಂಟೆ 11 ಶ್ರೀಮತಿ ಪುಷ್ಪಲತಾ ವಿ ಕೆ ಭಟ್ ಇವರು ದೇವರ ಸ್ತುತಿ ಹಾಗೂ ಭಜನೆಯ ಮಹತ್ವವನ್ನು ವಿವರಿಸಿದರು. ಶ್ರೀಮತಿ ಪ್ರೇಮಲತ ಸಿ ಅವರು ಭಜನೆ ಹೇಳಿಕೊಟ್ಟರು. ಶ್ರೀಯುತ ಬಳ್ಳಮೂಲೆ ಗೋವಿಂದ ಭಟ್ ಅವರು ಮಠ ಮತ್ತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಹೇಳಿದರು.
ಅಪರಾಹ್ನ 1.00 ಘಂಟೆಗೆ ಭೋಜನದ ಬಳಿಕ ಸಮಾರೋಪ ಹಾಗೂ ಶಾಂತಿಮಂತ್ರದೊಂದಿಗೆ ಸಮಾವೇಶ ಮುಕ್ತಾಯಗೊಂಡಿತು.
ಮಂಡಲ ವಿದ್ಯಾರ್ಥಿವಾಹಿನಿ ವಿಭಾಗದ ಎಡಕ್ಕಾನ ಕೇಶವಪ್ರಸಾದ ,ವಲಯ ಅಧ್ಯಕ್ಷ ಯೇತಡ್ಕ ರಮೇಶ ಭಟ್,ಕಾರ್ಯದರ್ಶಿ ಉಳುವಾನ ಈಶ್ವರಭಟ್ ,ಬೇತ ಮಹಾಬಲ ಭಟ್ ಉಪಸ್ತಿತರಿದ್ದರು. ವಿಧ್ಯಾರ್ಥಿ ವಾಹಿನಿ ಕಾಸರಗೋಡುವಲಯ ಸಂಚಾಲಕಿ ಶೀಮತಿಪುಷ್ಪ ಲತಾ ವಿ ಕೆ ಕಾರ್ಯಕ್ರಮ ನಿರೂಪಿಸಿದರು. 



ವರದಿ-ಶಿಷ್ಯ ಮಾಧ್ಯಮ ಕಾಸರಗೋಡು ವಲಯ
ಕಾಸರಗೋಡು ವಲಯ ವಿದ್ಯಾರ್ಥಿವಾಹಿನಿ ಸಮಾವೇಶ Reviewed by Unknown on 22:35:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.